ವಿಷಯಕ್ಕೆ ಹೋಗು

ಗಣೇಶ ಶಂಕರ ವಿದ್ಯಾರ್ಥಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
೧೯೪೦ರ ದಶಕದ ಭಾವಚಿತ್ರ

ಗಣೇಶ ಶಂಕರ ವಿದ್ಯಾರ್ಥಿ (1890-1931) ಒಬ್ಬ ಹಿಂದಿ ಸಾಹಿತಿ ಮತ್ತು ಸಾರ್ವಜನಿಕ ಕಾರ್ಯಕರ್ತ.

ಹುಟ್ಟಿದ ಊರು ನನಿಹಾಲ್ ಪ್ರಯಾಗ. ತಂದೆಯ ಹೆಸರು ಜಯನಾರಾಯಣ. ಮುಂಗಾವಲಿ (ಗ್ವಾಲೇರ್) ಎಂಬಲ್ಲಿ ಶಿಕ್ಷಣ ನಡೆಯಿತು. ಅನಂತರ ಕಾನ್‌ಪುರದಲ್ಲಿ ಸರ್ಕಾರಿ ನೌಕರಿ ಹಿಡಿದನಾದರೂ ಅಲ್ಲಿನ ಇಂಗ್ಲಿಷ್ ಅಧಿಕಾರಿಗಳ ಜೊತೆಗೆ ಹೊಂದಿಕೊಳ್ಳಲು ಆಗದದ್ದರಿಂದ ಆ ಕೆಲಸಕ್ಕೆ ರಾಜೀನಾಮೆ ಕೊಟ್ಟ. ಅನಂತರ ಸರಸ್ವತಿ, ಅಭ್ಯುದಯ ಇತ್ಯಾದಿ ನಿಯತಕಾಲಿಕ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯತೊಡಗಿದ. ಪ್ರಭಾ ಪತ್ರಿಕೆಯ ಸಂಪಾದಕನಾದ. 1913ರಲ್ಲಿ ಪ್ರತಾಪ ವಾರಪತ್ರಿಕೆಯ ಸಂಪಾದಕತ್ವವನ್ನು ವಹಿಸಿಕೊಂಡ ಮೇಲೆ ಒಂದು ಕಡೆ ನೆಲೆ ನಿಲ್ಲಲು ಸಾಧ್ಯವಾಯಿತು.[][][] ಕ್ರಮೇಣ ಪತ್ರಕರ್ತ, ನಿಬಂಧ ಲೇಖಕ ಮತ್ತು ವಿಶಿಷ್ಟ ಶೈಲಿಯ ಬರೆಹಗಾರ ಎಂದು ಹಿಂದಿ ಸಾಹಿತ್ಯದಲ್ಲಿ ಈತ ಪ್ರಸಿದ್ಧಿಗಳಿಸಿದ. ಒಕ್ಕಲಿಗರ ಚಳವಳಿಗಳಲ್ಲಿ, ಸಾಮಾಜಿಕ ಮತ್ತು ರಾಜಕೀಯ ಚಳವಳಿಗಳಲ್ಲಿ ನಿರ್ಭಯದಿಂದ ಈತ ಸಕ್ರಿಯವಾಗಿ ಭಾಗವಹಿಸಿದ. ಕಾನ್‌ಪುರದಲ್ಲಿ ನಡೆದ ಹಿಂದೂ-ಮುಸ್ಲಿಂ ದುರಂತದಲ್ಲಿ ನೊಂದವರಿಗೆ ಸಹಾಯ ಮಾಡುತ್ತಿರುವ ಸಮಯದಲ್ಲಿ ಗುಂಡಿನೇಟಿಗೆ ಬಲಿಯಾಗಿ ಈತ ಅಕಾಲ ಮರಣಕ್ಕೆ ತುತ್ತಾದ.

ಉಲ್ಲೇಖಗಳು

[ಬದಲಾಯಿಸಿ]
  1. Brass, Paul R. (1965). Factional Politics in an Indian State: The Congress Party in Uttar Pradesh. University of California Press. pp. 169–196.
  2. Mukul, Akshaya (2015-11-03). Gita Press and the Making of Hindu India. HarperCollins. ISBN 978-9351772316.
  3. Gould, William (2004-04-15). Hindu Nationalism and the Language of Politics in Late Colonial India. Cambridge University Press. pp. 61–100. ISBN 978-1139451956.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: